ಸೋಮವಾರ, ಜುಲೈ 24, 2017

ಜಯ ಜಯ ಜಗನ್ನಾಥ!

ಪುರಿಯ ಪುರಾಧೀಶ:
ಪುರಿಒಡಿಶಾ ಕರಾವಳಿಯ ಪುಟ್ಟ ಪಟ್ಟಣಸಟ್ಟನೆ ನೋಡಿದರೆನಮ್ಮ ಮಂಗಳೂರೋಉಡುಪಿಯೋಕಾರವಾರವೋ ಅನ್ನಿಸುವಂತಹ ಊರುಅದೇ ತೆಂಗುಬಾಳೆಹಸಿರು ಗದ್ದೆಗಳ ಸಾಲುಎಳನೀರು ಮಾರುವ ಪೋರರುಗೇರು ಹೂವಿನ ಘಮಭೂಲಕ್ಷಣದಲ್ಲಿ ತನ್ನಿಂದ ಸಾವಿರಾರು ಕಿಲೋಮೀಟರು ದೂರದಲ್ಲಿರುವ ಉಡುಪಿಯಂತಿರುವ ದೇಗುಲ ನಗರಿ ಪುರಿಅಲ್ಲಿರುವ ಪೊಡವಿಗೊಡೆಯನೇ ಇಲ್ಲಿರೂ ಆರಾಧ್ಯ ದೈವಅಲ್ಲಿ ಕಡೆಗೋಲು ಕೃಷ್ಣನಾದರೆಇಲ್ಲಿ ಜಗನ್ನಾಥಪುರಿಯ ದೇವಸ್ಥಾನದ ಅನ್ನಸಂತರ್ಪಣೆವಿಶ್ವವಿಖ್ಯಾತಮೋಕ್ಷಮಾರ್ಗಕ್ಕಾಗಿ ದರ್ಶನ ಮಾಡಬೇಕಿರುವ ಏಳು ಪುಣ್ಯಕ್ಷೇತ್ರಗಳಲ್ಲಿ ಈ ದೇಗುಲವೂ ಒಂದು ಎಂದು ಪುರಾಣಗಳೇ ಹೇಳುತ್ತವೆ.
ಜಗನ್ನಾಥನೆಂದರೆಜಗದ ಒಡೆಯ ಎಂದರ್ಥಆದರೆ ಈ ನಮ್ಮ ಕೃಷ್ಣನೆಂದ ಮೇಲೆ ಗೊತ್ತಲ್ಲಆತ ಒಡೆಯನಿಗಿಂತ ಜಾಸ್ತಿ ಸ್ನೇಹಿತನೇಪೂರ್ವ ಕರಾವಳಿಯ ಪುರಿಯಲ್ಲಿ ನೆಲೆ ನಿಂತ ಈ ಜಗನ್ನಾಥನೂ ಅಷ್ಟೇಸಖ ಭಾವದ ಸುಖೀ ದೇವರುನಾಡಿನೆಲ್ಲಡೆಯ ಜನ ಈ ಜಗನ್ನಾಥನ ಬೀಡಿಗೆ ಬಂದು ಆತನ ದರ್ಶನಕ್ಕೆಂದು ಸಾಲು ಹಚ್ಚಿ ನಿಂತರೆ ಬಿಡುಗಣ್ಣನಾಗಿ ಎಲ್ಲರಿಗೂ ಆಶೀರ್ವಾದ ಮಾಡುತ್ತ ನಿಲ್ಲುವ ಬಣ್ಣದ ದೇವ ಅವನಿಲ್ಲಿಹಸಿದ ಹೊಟ್ಟೆಗೆ ಇಲ್ಲವೆನ್ನದೆ ಊಟವನಿಕ್ಕುವ ಮಹಾಗುರುಇಲ್ಲಿ ಉಣ್ಣದೇ ಹೋಗುವ ಭಕ್ತರಿಲ್ಲದೇವರಿಗೆ ಕೈ ಮುಗಿಯುವುದು ಮರೆತರೂಘಮಘಮ ಕಿಚಡೀ ಹೊಟ್ಟೆಗಿಳಿಯದೇ ಹೋಗದೇನೋ.


ಪುರಾಣದಲ್ಲೇನಿದೆ?
ಇಂದ್ರದ್ಯುಮ್ನನೆಂಬ ಮಹಾರಾಜನ ಅಪರಿಮಿತ ವಿಷ್ಣುಭಕ್ತಿಪುರಿಯ ದೇಗುಲದ ಮೂಲಖುದ್ದು ವಿಷ್ಣುವೇವಿಶ್ವಕರ್ಮನೊಡಗೂಡಿ ಅಪೂರ್ಣ ಮೂರ್ತಿಗಳನ್ನ ಕೆತ್ತಿದ್ದನೆಂಬುದು ಐತಿಹ್ಯ೨೧ ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆಗೆಯಬಾರದೆಂಬ ಶರತ್ತನ್ನ ಮೀರಿ ಇಂದ್ರದ್ಯಮ್ನನ ಪತ್ನಿಬಾಗಿಲು ತೆಗೆದ ಕಾರಣಕ್ಕೆ ಮೂರ್ತಿಗಳಿಗೆ ಕೈ ಕಾಲುಗಳೇ ಮೂಡಿರಲಿಲ್ಲ.ಅಂದಿನಿಂದ ಇಂದಿನವರೆಗೂ ಜಗನ್ನಾಥ ಬಲರಾಮ ಸುಭದ್ರೆಯರು ಬಿಟ್ಟಗಣ್ಣಿನಬಣ್ಣಬಣ್ಣದ ಅಲಂಕಾರ ಹೊಂದಿರುವ ಚೆಲುವ ಚೆಲುವೆಯರುಹಾಂಮರದ ಮೂರ್ತಿಗಳು ಇವೆಲ್ಲನಮ್ಮ ಎಂದಿನ ಸಂಪ್ರದಾಯದ ಕಲ್ಲಿನ ವಿಗ್ರಹಗಳಲ್ಲ!
ಬ್ರಹ್ಮಾಂಡ ಪುರಾಣಸ್ಕಂದ ಪುರಾಣಭವಿಷ್ಯ ಪುರಾಣವೂ ಸೇರಿದಂತೆ ಹಲವು ಪುರಾಣಗಳಲ್ಲಿ ಮತ್ತೆ ಮತ್ತೆ ಪುರಿಯ ಉಲ್ಲೇಖವಿದೆಜಗನ್ನಾಥನನ್ನು ವರ್ಣಿಸುವ ಶ್ಲೋಕಗಳಿವೆಎಂದಿನಂತೆತನ್ನ ಪತ್ನಿಯರ ಜೊತೆಗಲ್ಲದೇ ಒಡಹುಟ್ಟಿದವರ ಜೊತೆಗೆ ನೆಲೆನಿಂತ ಈ ವಾಸುದೇವನಿಗೆಅಪಾರ ಗೌರವಇಂದ್ರದುಮ್ಯನ ಅಂದು ವಿಷ್ಣುವನ್ನು ಕೋರಿಕೊಂಡಂತೆಯೇಇಂದಿಗೂ ಈ ದೇಗುಲ ಕೇವಲ ಮೂರು ತಾಸುಗಳಷ್ಟೇ ಮುಚ್ಚಿರುತ್ತದೆಹಗಲಿರುಳುಳೆನ್ನದೇ ಮಂದಿರವನ್ನು ಸಂದರ್ಶಿಬಹುದಾದಅದ್ವೀತೀಯ ತಾಣ ಇದು.



ಆಧ್ಯಾತ್ಮ ಕ್ಷೇತ್ರ:
ಪುರಿಯ ಮಂದಿರದ ಬಗ್ಗೆಕಾಲನ ಹೊಡೆತಕ್ಕೋವೈರಿಗಳ ಅಟಾಟೋಪಕ್ಕೋ ಸಿಕ್ಕು ಧ್ವಂಸಗೊಂಡ ದೇವಳವನ್ನ ಮತ್ತೆ ಮತ್ತೆ ಕಟ್ಟಿಸಿದ ರಾಜರುಗಳ ಬಗ್ಗೆ ಹೇಳಹೊರಟರೆ ಅದೇ ಇನ್ನೊಂದು ಲೇಖನವಾದೀತುಈಗಿರುವ ದೇಗುಲವನ್ನು ಕಟ್ಟಿಸಿದಾತಕಳಿಂಗ ರಾಜ ಖರವೇಲವೇದಗಳಿಗಿಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ಜಗನ್ನಾಥಆ ಯಾವ ಆಡಂಬರವನ್ನೂ ಹೊರದೇ ಸರಳರಲ್ಲಿ ಸರಳನಂತೆ ನಿಂತಿದ್ದಾನೆ ಇಲ್ಲಿಆದರೆ ಆ ಸರಳತೆಯ ಹಿಂದೆ ಭಾರತದ ಭವ್ಯ ಆಧ್ಯಾತ್ಮ ಪ್ರಪಂಚದ ಹೊಳಹುಗಳಿವೆಇಲ್ಲಿನ ಮೂರು ಮೂರ್ತಿಗಳು ಸರ್ವಜ್ಞತೆ-ಸರ್ವವ್ಯಾಪಕತೆಸರ್ವಶಕ್ತತೆಯನ್ನು ಪ್ರತಿನಿಧಿಸುತ್ತವೆದೇಗುಲದ ಗೋಪುರದಲ್ಲಿನ ಸುದರ್ಶನ ಚಕ್ರಇವೆಲ್ಲವನ್ನು ಮೀರಿದ ನಾಲ್ಕನೆಯ ಆಯಾಮವನ್ನ ಸೂಚಿಸುತ್ತದೆಪದೇ ಪದೇ ಬದಲಾಗುವ ಮೂರ್ತಿಗಳುವಿಗ್ರಹಗಳಿಗಿಂತ ಮೂಲತತ್ವವೇ ಮುಖ್ಯ ಎಂಬುದನ್ನು ಸಾರುತ್ತವೆಪಾಂಡವರಾದಿಯಾಗಿಆದಿ ಶಂಕರಾಚಾರ್ಯರೂ ಸೇರಿದಂತೆ ಅದೆಷ್ಟೋ ಸಾಧಕರನ್ನ ಸೆಳೆದ ದಿವ್ಯ ಕ್ಷೇತ್ರವಿದು.
ಇಲ್ಲಿನ ಮೂರ್ತಿಗಳಿಗೆ ಕೈ-ಕಾಲುಗಳಿಲ್ಲದೇ ಇರುವುದಕ್ಕೆ ಒಂದು ಕಥೆಯಿದೆಪ್ರಾಪಂಚಿಕ ಇಹ ಭೋಗಗಳ ಈ ಜಗತ್ತಿನಲ್ಲಿ ನಮಗೆ ಯಾವ ಕೈಕಾಲುಗಳೂ ಬೇಡ ಎಂದನಂತೆ ಜಗನ್ನಾಥಎಲ್ಲವನ್ನೂ ಕಣ್ಣಿನಿಂದಲೇ ಸ್ವೀಕರಿಸುತ್ತೇನೆಸಾಕುಭಕ್ತರ ಕಣ್ಣಿಗೆ ನನ್ನ ಕಣ್ಣುಗಳು ಕಾಣಲಿನಮ್ಮ ಸಂವಹನ ಅಷ್ಟರಿಂದಲೇ ಸಾಧ್ಯ ಎಂದು ಇಂದ್ರದ್ಯುಮ್ನನಿಗೆ ಸಮಾಧಾನ ಹೇಳಿದ್ದನಂತೆ!


ವಿಶಿಷ್ಟ ಆಚರಣೆಗಳ ಸರಳ ಜಗನ್ನಾಥ:
ಪುರಿಯನ್ನು ಜಗನ್ನಾಥನು ಆವರಿಸಿಕೊಂಡಿರುವ ಪರಿ ಅನನ್ಯಇಲ್ಲಿನ ಮಂದಿಗೆ ಅವನೇ ಗುರುಊರಿಗೂರೇ ಅವನ ಧ್ಯಾನದಲ್ಲಿ ಮಗ್ನವಾದೊಂದು ಮಹಾಮೇಳದಂತೆ ಕಾಣುತ್ತದೆದೇವರನ್ನ ಸ್ನೇಹಿತನಂತೆ ಕಾಣುತ್ತಅವನನ್ನೊಂದು ನೋಡಿಕೊಂಡು ಬನ್ನಿ ಎಂದು ಏಕವಚನದಲ್ಲಿ ಜಗನ್ನಾಥನ ಬಗ್ಗೆ ಮಾತನಾಡುತ್ತ ಸಂಚರಿಸುವ ಸೈಕಲ್ ರಿಕ್ಷಾವಾಲಾಗಳುದೇವರ ಪ್ರಸಾದವನ್ನು ಉಂಡೇ ಇಲ್ಲವೇ ಇನ್ನೂ ಎಂದು ಕಣ್ಣು ಬಿಟ್ಟು ಅಚ್ಚರಿ ವ್ಯಕ್ತ ಪಡಿಸುವ ಅಂಗಡಿಯವರು, "ಜಗತ್ತಿನ ಅತ್ಯಂತ ದೊಡ್ಡ ಹೋಟೇಲು ಯಾವುದು ಗೊತ್ತಾಇದೇಜಗನ್ನಾಥನ ಮಂದಿರಎಂದು ನಗುವ ಪಾಂಡಾಗಳು.. ಹೀಗೆ ನಗರ ತುಂಬ ಜಗನ್ನಾಥನದೇ ಗುಂಗು.
ಈ ಜಗನ್ನಾಥನೂ ಅಷ್ಟೇಸಂಪ್ರದಾಯಗಳನ್ನು ಮೀರಿ ನಿಂತ ಪುಣ್ಯಾತ್ಮಅದಕ್ಕಾಗಿಯೇ ಏನೋಜನರಿಗೂ ಅವನೆಂದರೆ ಇಷ್ಟ೧೦-೧೯ ವರ್ಷಗಳಿಗೊಮ್ಮೆಇಲ್ಲಿ ದೇವ ವಿಗ್ರಹಗಳೇ ಬದಲಾಗುತ್ತವೆ. ಆಷಾಢ ಅಧಿಕಮಾಸ ಬಂದ ವರ್ಷವೆಲ್ಲಹೊಸ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ.  ವರ್ಷಕ್ಕೆ ಹದಿನೈದು ದಿನ ಆರೋಗ್ಯ ಸರಿಯಿಲ್ಲ ಎಂದು ದೇವರೂ ರಜೆ ಹಾಕುತ್ತಾರೆಹೌದು. ಆಷಾಢ ಮಾಸದ ಸೆಖೆಯಲ್ಲಿ ದೇವರುಗಳೆಲ್ಲ ಹೊರ ಬಂದು ಸ್ನಾನ ಮಾಡುತ್ತಾರೆ! ಸ್ನಾನ ಪೂರ್ಣಿಮೆಯೆಂದೇ ಹೆಸರು ಆದಿನಕ್ಕೆ. ಹದಿನೈದು ದಿನಗಳ ಸ್ನಾನ ಮತ್ತು ಮಾವಿನಹಣ್ಣಿನರಸದ ಅಭಿಷೇಕ ದಿಂದ ಸುಸ್ತಾದ ಸ್ವಾಮಿ, ಹುಷಾರು ತಪ್ಪಿ ಮುಂದಿನ ಹದಿನೈದು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡದೇರಜೆ ಹಾಕಿ ಮೂಲಿಕೆಗಳ ಔಷಧ ಸ್ವೀಕರಿಸುತ್ತ ಆರಾಮಾಗುತ್ತಾರೆಇಂಥ ದೇವ ಎಲ್ಲಿ ಸಿಕ್ಕಾನು ಹೇಳಿನಮ್ಮ ಮಧ್ಯದಿಂದಲೇ ಎದ್ದು ಹೋಗಿ ಕೂತಂತೆ ಕಾಣುವ ಜಗದ ನಾಥ ಈತ!


ಜಗನ್ನಾಥ ರಥೋತ್ಸವ:
ವಿಶ್ವಪ್ರಸಿದ್ಧ ಜಗನ್ನಾಥ ರಥೋತ್ಸವದ ಬಗ್ಗೆ ತಿಳಿಯದವರಿಲ್ಲವೇನೋ. ಪ್ರತಿ ವರುಷ, ಇಲ್ಲಿ ನಡೆಯುವ ರಥಯಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದ ಹಿಂದಿನ ಆಚರಣೆಯೂ ಮಜವಾಗಿದೆ! ಈ ಹುಷಾರಿಲ್ಲದೇ ಮಲಗಿದ್ದ ಕೃಷ್ಣ- ಬಲರಾಮ-ಸುಭದ್ರೆಯರು, ಮತ್ತೆ ಆರೋಗ್ಯವಂತರಾದ ಮೇಲೆ ಅವರಿಗೆಲ್ಲ ಏನಾದರೂ ರುಚಿ-ರುಚಿಯಾಗಿದ್ದು ತಿನ್ನಬೇಕು ಅನ್ನಿಸಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಂಡೀಚಾ ಅನ್ನುವ ತನ್ನ ಅತ್ತೇಮನೆಗೆ ಹೋಗುತ್ತಾರೆ! ದೇವರೆಂದ ಮೇಲೆ ಸುಮ್ಮನೇ ಹೋಗಲು ಸಾಧ್ಯವೇ? ಅದಕ್ಕೇ ಈ ರಥಯಾತ್ರೆ ನಡೆಯುತ್ತದೆ. ವೈಭವೋಪೇತವಾಗಿ ಅಲಂಕರಿಸಿಕೊಂಡ ಸೋದರ ಸೋದರಿಯರು, ಅಲ್ಲಿ ಹೋಗಿ ಒಂದಿಷ್ಟು ದಿನಗಳ ಕಾಲ ಇದ್ದು ಬರುತ್ತಾರೆ. ತನ್ನ ಬಾಲ್ಯಕ್ಕೆ ಮರಳುವ ಕೃಷ್ಣನ ಸಂಭ್ರಮ ಇದು. ಹೆಂಡತಿ ಲಕ್ಷ್ಮಿಯನ್ನ ದೇಗುಲದಲ್ಲೇ ಬಿಟ್ಟು- ತಾನು ಮಾತ್ರ ಅಣ್ಣ ತಂಗಿಯರೊಡಗೂಡಿ ಹೋಗುತ್ತಾನೆ ಜಗನ್ನಾಥ. ಗುಂಡೀಚ ದೇಗುಲದಲ್ಲಿ ಕೃಷ್ಣನ ಆಮೋದ ಪ್ರಮೋದಗಳ ಸಕಲ ವ್ಯವಸ್ಥೆಗಳೂ ಇದೆ! ಆತ ಅಲ್ಲಿ ಎಲ್ಲ ಮರೆತು ರಾಸಲೀಲೆಯಾಡುತ್ತಾನೆ, ಬೇಕುಬೇಕಾದ ತಿಂಡಿ ತಿನಿಸುಗಳನ್ನ ತಿನ್ನುತ್ತಾನೆ. ಸಿಟ್ಟುಗೊಂಡು ಬಂದ ಲಕ್ಷ್ಮಿಯನ್ನ ಸಮಾಧಾನಿಸಿ ಮರಳಿ ಕಳಿಸುತ್ತಾನೆ! ಎಲ್ಲ ಮುಗಿದ ಮೇಲೆ-ತಾನು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ವಾಪಸ್ಸು ಬರುತ್ತಾನೆ. ಇಲ್ಲಿನ ಮಂದಿ ಕೃಷ್ಣನೊಡಗೂಡಿ ತಾವು ಕೂಡ ಈ ರಥಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಾವೂ ಆತನ ಬಾಲ್ಯಕ್ಕೆ ಹೋಗುತ್ತಾರೆ. ಪುರಿಯ ಬೀದಿ ಬೀದಿಗಳಲ್ಲಿನ ಎಲ್ಲ ದೇಗುಲಗಳೂ ಕೃಷ್ಣನ ನೆಂಟರದೇ! ಅತ್ತೆ-ಮಾವ-ಚಿಕ್ಕಮ್ಮ-ಚಿಕ್ಕಪ್ಪ-ಹೆಂಡತಿ-ಅಣ್ಣ-ಹೀಗೆ ಎಲ್ಲ ಕಡೆಗಳಿಗೂ ಈ ಜಗನ್ನಾಥ ರಥಯಾತ್ರೆಯ ನೆಪದಲ್ಲಿ ಭೇಟಿಕೊಡುತ್ತಾನೆ. ಅಲ್ಲೆಲ್ಲ ರಥ ಸಾಗುತ್ತದೆ.


ದೇವನೊಬ್ಬ, ತಾನು ದೈವತ್ವಕ್ಕೇರಿದ್ದರೂ, ಹೀಗೆ ಮನುಷ್ಯ ಸಹಜ ಆಚರಣೆಗಳ ಮೂಲಕ ಜನಮಾನಸಕ್ಕೆ ಬಹಳ ಹತ್ತಿರವಾಗುತ್ತಾನೆ. ತಾನೂ ಕೂಡ ನಿಮ್ಮಂತೆಯೇ ಎಂಬ ಆಪ್ತತೆಯನ್ನ ಸಾಮಾನ್ಯರಲ್ಲಿ ಬಿತ್ತುತ್ತಾನೆ. ಜಗನ್ನಾಥ ಈ ಕಾರಣಕ್ಕಾಗಿಯೇ ಎಲ್ಲರಿಗೂ ಪ್ರಿಯ. ಇಷ್ಟೊಂದು ಸರಳ ದೇವರು ಭಾರತದಲ್ಲಿ ಬೇರೆಲ್ಲಿಯೂ ಇಲ್ಲವೇನೋ. ತುಂಬ ಮಡಿವಂತಿಕೆ ಇಲ್ಲದ, ತಿಂಡಿಪೋತ ದೇವರು ನಮ್ಮ ಜಗನ್ನಾಥ. ದಿನವಿಡೀ ದರ್ಶನ ನೀಡುವ, ಬಡವ ಬಲ್ಲಿದನೆಂಬ ಭೇದವಿಲ್ಲದ, ಅತ್ಯುಚ್ಚವಾದ ಆಚಾರವನ್ನೋ, ಪಾಂಡಿತ್ಯವನ್ನೋ ಬೇಡ ಈ ಮಹಾಗುರು, ಸಮಸ್ತರಿಗೂ ಆಪ್ತ. ಜಗನ್ನಾಥನ ಮಂದಿರದೊಳಗೆ ಒಮ್ಮೆ ನಡೆದಾಡಿದರೆ, ಯಾರಿಗೇ ಆದರೂ ಅದರ ಅರಿವಾಗುತ್ತದೆ.
ಮತ್ತೆ ಮತ್ತೆ ಸತ್ತು ಹುಟ್ಟುವ ಜಗನ್ನಾಥ, ಮನುಷ್ಯರಾದವರೂ ದೈವತ್ವಕ್ಕೇರಬಹುದು ಎಂಬ ಸತ್ಯವನ್ನು ಸಾರುತ್ತ ಪುರಿಯಲ್ಲಿ ನಿಂತಿದ್ದಾನೆ. ಕೈಕಾಲುಗಳ ಅಗತ್ಯವಿಲ್ಲದೆಯೇ ಜಗವನ್ನು ಮುನ್ನೆಡಬಹುದು, ಹೃದಯದಲ್ಲಿ ಭಕ್ತಿಯಿದ್ದರೆ ಸಾಕು ಎನ್ನುವ ಈ ಜಗನ್ನಾಥನಿಗೆ-ಜಗನ್ನಾಥನೇ ಸಾಟಿ!

ಸತ್ತು ಹುಟ್ಟುವ ದೇವರುಗಳು
ಜಗತ್ತಿನ ಯಾವ ದೇವಸ್ಥಾನದಲ್ಲಿಯೂ ಇಲ್ಲದ ಅತ್ಯಂತ ವಿಶೇಷ ಆಚರಣೆ ಪುರಿಯ ದೇಗುಲದಲ್ಲಿದೆ. ಅಧಿಕ ಆಷಾಢ ಮಾಸ ಬಂದ ವರ್ಷ ಅಲ್ಲಿನ ಮೂರ್ತಿಗಳನ್ನ ಬದಲಾಯಿಸಲಾಗುತ್ತದೆ. ಈ ಆಚರಣೆಗೆ ನಬಕಲೇಬರ ಎಂದು ಹೆಸರು. ನವ ಕಳೇಬರವೆಂದರೆ-ಹೊಸ ದೇಹ ಎಂದರ್ಥ. ಹನ್ನೆರಡು ಅಥವಾ ಹತ್ತೊಂಬತ್ತು ವರುಷಗಳಿಗೊಮ್ಮೆ ಬರುವ ಈ ಅಧಿಕ ಮಾಸದಲ್ಲಿ, ಹಳೆಯ ಮೂರ್ತಿಗಳನ್ನು ವಿಸರ್ಜಿಸಿ-ಹೊಸ ವಿಗ್ರಹಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮರದ ಮೂರ್ತಿಗಳಾದ ಕಾರಣಕ್ಕೆ, ಈ ವಿಹ್ರಗಗಳೂ ಕೂಡ ಜೀರ್ಣಾವಸ್ಥೆಯನ್ನು ತಲುಪಿರುತ್ತವೆ. ಈ ಹೊತ್ತಿನಲ್ಲಿ ದಾರುಬ್ರಹ್ಮವೆಂದು ಕರೆಯುವ ಬೇವಿನ ಮರದಿಂದ ಹೊಸ ಕಾಷ್ಠ ಶಿಲ್ಪಗಳನ್ನ ಕೆತ್ತಲಾಗುತ್ತದೆ. ಈ ಮರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಕೂಡ ಬಹಳ ಸೂಕ್ಷ್ಮ ಪ್ರಕ್ರಿಯೆಗಳಿದ್ದು- ಕಡುಗಪ್ಪು ಬಣ್ಣದ ಮರವೇ- ಜಗನ್ನಾಥನ ಕೆತ್ತನೆಗೆ ಬೇಕಿದ್ದರೆ, ಬಲರಾಮ ಸುಭದ್ರೆಯರಿಗೆ ಮಾಮೂಲು ಮರಗಳೇ ಸಾಕು.  ಹೊಸ ವಿಗ್ರಹಗಳು ಸಿದ್ಧವಾದ ಮೇಲೆ,  ಹಳೆಯ ಮೂರ್ತಿಗಳು ಸಾವನ್ನಪ್ಪಿದವೆಂದು ನಿರ್ಣಯಿಸಿ-ಸೂಕ್ತ ಕ್ರಿಯಾ ಕರ್ಮಗಳನ್ನೂ ನಡೆಸಲಾಗುತ್ತದೆ. ಹೊಸ ದೇಹಗಳೊಂದಿಗೆ ಹಳೆಯ ದೇವರುಗಳು ಮತ್ತೆ ಭಕ್ತರ ದರ್ಶನಕ್ಕೆ ಸಿದ್ಧವಾಗುತ್ತಾರೆ. ತೀರಾ ಇತ್ತೀಚೆಗೆ, 2015 ನೇ ಇಸವಿಯಲ್ಲಿ ನಬಕಲೇಬರ ಆಚರಣೆ ಜರುಗಿತ್ತು.

ಜಗನ್ನಾಥ ಮಹಾಪ್ರಸಾದ:
ಪುರಿಯ ದೇಗುಲದ ಮಹಾಪ್ರಸಾದ, ಅತ್ಯಂತ ವಿಶಿಷ್ಠವಾದದ್ದು. ಜಗನ್ನಾಥನಿಗೆ ಪ್ರತಿದಿನ, ತಪ್ಪದೆ, 56 ಬಗೆಯ ವಿವಿಧ ಖಾದ್ಯ-ಅನ್ನ ನೈವೇದ್ಯವನ್ನ ಸಮರ್ಪಿಸಲಾಗುತ್ತದೆ. ಛಪ್ಪನ್ನ ಭೋಗ್ ಎಂದು ಕರೆಯುವ ಈ ಆಹಾರ ಸಮ್ಮೇಳವೇ-ಬಾಯಲ್ಲಿ ನೀರೂರಿಸುವಂತದ್ದು. ಅನ್ನ, ತುಪ್ಪದಲ್ಲಿ ಕಲಸಿದ ಅನ್ನ, ಸಿಹಿಯಾದ ದಾಲ್, ಕಿಚಡಿ, ತರಕಾರಿಗಳನ್ನ ಬೆರೆಸಿ ಮಾಡಿರುವ ವೈವಿಧ್ಯಮಯ ಸಾರು/ಸಾಂಬಾರುಗಳು.. ಭಕ್ಷ್ಯಗಳು- ಹೀಗೆ ಇವೆಲ್ಲವನ್ನ ಭೋಜನಪ್ರಿಯ ಜಗನ್ನಾಥನಿಗೆ ಸಮರ್ಪಿಸಿ- ಭಕ್ತಾದಿಗಳಿಗೂ ಬಡಿಸಲಾಗುತ್ತದೆ. ನಿತ್ಯ ಇವುಗಳನ್ನ ಕಟ್ಟಿಗೆಯ ಒಲೆಯಲ್ಲೇ, ಮಡಿಕೆಗಳಲ್ಲಿಯೇ ಬೇಯಿಸಲಾಗುತ್ತದೆ. ಒಂದರ ಮೇಲೊಂದು ಮಡಿಕೆಗಳನ್ನ ಇರಿಸಿ, ಈ ಮಹಾಪ್ರಸಾದವನ್ನು ತಯಾರಿಸುವುದನ್ನು ನೋಡುವುದೇ ಒಂದು ಸೊಗಸು.

ರಥೋತ್ಸವದ ತಯಾರಿ
ಪ್ರತಿ ವರುಷದ ರಥೋತ್ಸವಕ್ಕೆ ಕೂಡ ಹೊಸ ರಥಗಳನ್ನ ನಿರ್ಮಿಸುವುದು ಜಗನ್ನಾಥ ದೇಗುಲದ ವಿಶೇಷತೆ. ಸುಮಾರು ೪೫ ಅಡಿಗಳಷ್ಟು ಎತ್ತರವಿರುವ ರಥಗಳ ನಿರ್ಮಾಣವೇ ಒಂದು ಕಲೆ. ಜಗನ್ನಾಥನ ರಥ, ನಂದಿಘೋಷ, ಬಲರಾಮನದು ತಾಲಧ್ವಜ, ಸುಭದ್ರೆಯದು ಪದ್ಮಧ್ವಜ. ನೋಡಲು ದೇಗುಲದ ಗೋಪುರಗಳನ್ನೇ ಹೋಲುವ ರಚನೆಯನ್ನ ಈ ರಥಗಳು ಹೊಂದಿದ್ದು ಜಗನ್ನಾಥನ ರಥ, ಎಲ್ಲಕ್ಕೂ ಎತ್ತರವಾಗಿದೆ. ನೂರಾರು ವರುಷಗಳಿಂದಲೂ ಒಂದೇ ರೀತಿಯಾಗಿ ಈ ರಥಗಳ ನಿರ್ಮಾಣ ನಡೆಯುತ್ತಿದ್ದು, ತಲೆತಲಾಂತರಗಳಿಂದಲೂ ಒಂದೇ ಮನೆತನದ ಮಂದಿ ಈ ಹಕ್ಕನ್ನ ಹೊಂದಿದ್ದಾರೆ. ಪ್ರತಿವರುಷ ಒಡಿಶಾದ ಕಾಡುಗಳಲ್ಲಿ ಅದಕ್ಕೆ ಬೇಕಾದ ಮರಗಳನ್ನ ಪೂಜಿಸಿ, ಕಡಿದು- ನಂತರ ಮಹಾನದಿಯಲ್ಲಿ ಮರಗಳ ತುಂಡುಗಳನ್ನ ತೇಲಿಬಿಡಲಾಗುತ್ತದೆ. ಅವುಗಳನ್ನ ಪುರಿಯಲ್ಲಿ ಸಂಗ್ರಹಿಸಿ, ಅಕ್ಷಯ ತೃತೀಯಾದ ಪುಣ್ಯದಿನದಂದು ರಥಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನೂರಾರು ಮಂದಿ ಸುಮಾರು ಎರಡು-ಮೂರು ತಿಂಗಳುಗಳ ಕಾಲ ಶ್ರಮಿಸಿ ರಥಗಳನ್ನ ಸಿದ್ಧಗೊಳಿಸುತ್ತಾರೆ. ಹದಿನಾರು ಚಕ್ರಗಳನ್ನ ಹೊಂದಿರುವ, ಕೆಂಪು ಮತ್ತು ಹಳದೀ ವಸ್ತ್ರಗಳಿಂದ ಅಲಂಕೃತವಾದ ಜಗನ್ನಾಥದ ರಥದ ದರ್ಶನವೇ ರೋಮಾಂಚನಕಾರಿ.  

ವಿದೇಶಗಳಲ್ಲೂ ರಥೋತ್ಸವ:
ಈಗ ಜಗತ್ತಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜಗನ್ನಾಥನ ರಥ ಯಾತ್ರೆಯ ದಿನದಂದೇ ಭಕ್ತರೆಲ್ಲ ಸೇರಿ ರಥ ಯಾತ್ರೆಯನ್ನ ನಡೆಸುತ್ತಾರೆ. ನ್ಯೂಯಾರ್ಕ್, ಲಂಡನ್, ಮಾಸ್ಕೋ ಸೇರಿದಂತೆ ಬಹು ಮುಖ್ಯ ನಗರಗಳಲ್ಲಿ ಜಗನ್ನಾಥನ ಯಾತ್ರೆ ಸಂಚರಿಸುತ್ತದೆ!

ಬುಧವಾರ, ಜುಲೈ 12, 2017

ತೆರಿಗೆ ಬೇನೆ!

ನಿತ್ಯ ಬೆಳಗ್ಗೆದ್ದು ಯಾರನ್ನಾದರೂ ಒಬ್ಬರನ್ನ ಕಡ್ಡಾಯವಾಗಿ ನೆನೆಸಿಕೊಳ್ಳಲೇಬೇಕು ಅಂತ ಭಗವಂತನೇನಾದರೂ ರೂಲ್ಸು ಮಾಡಿದರೆ ನಾನು ನಂಗೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಟೀಚರಾಗಿದ್ದ ವಿನ್ನಿ ಟೀಚರನ್ನು ನೆನಪಿಸಿಕೊಳ್ಳುತ್ತೇನೆ. ಅನುಮಾನವೇ ಇಲ್ಲ. ಯಾಕೆಂದರೆ ಲೆಕ್ಕ ಅನ್ನುವುದು, ನನ್ನ ತಲೆಗೆ ಹೋಗುವುದು ಬಿಡಿ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ನೀವ್ ಯಾವ್ದೇ ಕೇಳಿ, ನಂಗೆ ಎಲ್ಲ ಕಬ್ಬಿಣದ ಕಡಲೆಯೇ. ಒಂದು ಹೆಚ್ಚು ಕಷ್ಟ, ಇನ್ನೊಂದು ಅದ್ಕಿಂತ ಹೆಚ್ಚು ಕಷ್ಟ, ಆಮೇಲಿಂದ ಅಭೂತಪೂರ್ವ ಕಷ್ಟ. ನಾನು ಹೇಗಾದರೂ ಮಾಥ್ಸಲ್ಲಿ ಗೋತಾ ಹೊಡೀತೇನೆ ಎನ್ನುವುದು ನಮ್ ಮನೇಲಿ ಬಿಡಿ, ನಮ್ಮ ಇಡೀ ವಠಾರಕ್ಕೇ ಗೊತ್ತಿತ್ತಾಗಿ ನಮ್ಮಪ್ಪ ವಿನ್ನೀ ಟೀಚರ ಬಳಿ ಏನೋ ಸಂಜೆ ಹೊತ್ತಿಗೆ ಸ್ವಲ್ಪ ಲೆಕ್ಕ ಹೇಳ್ಕೊಡಿ ಎಂದು ಕೇಳಿದ್ದರು. ಪರೀಕ್ಷೆಯ ಮುನ್ನಾದಿನದ ವರೆಗೂ ಅವರು ನನ್ನ ತಲೆಗೆ ಅದೇನೇನೋ ತುಂಬೀ ತುಂಬೀ ನನ್ನ ಉದ್ದಾರದ ಸಕಲ ಯತ್ನಗಳನ್ನ ಮಾಡಿದ್ದರು. ಇಷ್ಟಾಗಿಯೂ, ಯಾರಿಗೂ ಏನೂ ಭರವಸೆ ಇರಲಿಲ್ಲ. ಮುಂದಿನದು ದೇವರಾ ಚಿತ್ತ ಅಂತ ಸುಮ್ಮನಿದ್ದರು. ಕೊನೇಗೆ ರಿಸಲ್ಟು ಬಂದ ದಿನ ನೋಡಿದರೆ, ಕರೆಕ್ಟಾಗಿ ಮೂವತ್ತೈದು ಮಾರ್ಕು ಬಂದು ನಾನು ಗಣಿತ ಪಾಸಾಗಿದ್ದೆ! ಅಪ್ಪ ನಿರ್ದಾಕ್ಷಿಣ್ಯವಾಗಿ ಇದು ನಿನ್ನ ಸಾಧನೆಯೇನೂ ಅಲ್ಲ, ವಿನ್ನೀ ಟೀಚರಿದ್ದು ಅಂದಿದ್ದರು. ಅಲ್ಲ, ನಂಗೆ ಅದರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ!

ಆವತ್ತೇ ಕೊನೆ.ನಾನು ಈ ಲೆಕ್ಕದ ದಿಕ್ಕಲ್ಲಿ ಮುಖ ಹಾಕಿ ನಿಂತಿದ್ದರೆ ಕೇಳಿ. ಆಮೇಲೆ ನಾನು ಓದುವ ಯಾವ ಕೋರ್ಸಿನಲ್ಲಿರೂ ಅದರ ನೆರಳೂ ಕೂಡ ಕಾಣಬಾರದೆಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು, ಶಿಕ್ಷಣಶರಧಿಯನ್ನೇನೋ ದಾಟಿಬಿಟ್ಟೆ! ಆದರೆ ನಾನು ಗಣಿತವನ್ನು ಬಿಟ್ಟರೂ, ಈ ಅಗಣಿತ ತಾರಾ ಮಂಡಲದವರೆಗೆ ವ್ಯಾಪಿಸಿರುವ ಈ ಕೂಡುಕಳೆಯಾಟ ನನ್ನನ್ನ ಬಿಡಬೇಕಲ್ಲ! ಏನೋ, ಓದ್ಕಂಡು ನನ್ನ ಪಾಡಿಗೆ ನಾನು ಯಾವ್ದೋ ಕೆಲಸ ಮಾಡುತ್ತೇನೆ, ಕಂಪನಿ ಸಂಬಳ ಕೊಡತ್ತೆ ತಗೊಂಡರಾಯ್ತು ಅಂತ ಅಂದುಕೊಂಡಿದ್ದರೆ, ವಕ್ಕರಿಸಿತು ನೋಡಿ, ಈ ಟ್ಯಾಕ್ಸು ಲೆಕ್ಕಾಚಾರ. ಭಗವಂತನೇ. ಎಲ್ಲೆಲ್ಲೋ ಪಾರಾಗಿ ತುದೀಗೆ ಹೀಗೆ ಸಿಕ್ಕಾಕ್ಕೊಂಡಿದ್ದೆ ನಾನು. ಈ ಲೆಕ್ಕ ಹಾಕದೇ ವಿಧಿಯಿಲ್ಲ ಆದರೆ ನನಗೋ, ಸುತಾರಾಂ ತಲೆಗೆ ಹೋಗುವುದಿಲ್ಲ.

ಯಾವುದೇ ಕಂಪನಿಯಾಗಿರಲಿ, ಈ ಹೆಚ್ಚಾರುಗಳು ನಾವು ಕೆಲಸಕ್ಕೆ ಸೇರುವಾಗ ಹೇಳುವ ಸಂಬಳಕ್ಕೂ ಆಮೇಲೆ ಕೈಗೆ ಬರುವ ಮನೆಗೆ ಕೊಂಡುಯ್ಯುವ ಟೇಕ್ ಹೋಮು ಸ್ಯಾಲರಿಗೂ ತಲೆಬುಡ ಹೊಂದಿಕೆಯಾದರೆ ಕೇಳಿ! ನೂರಾರು ಅಲೋವೆನ್ಸು, ಟ್ಯಾಕ್ಸುಗಳ ಕಥೆ ಹೇಳಿ ಹರಿದ ಗೋಣಿಯಲ್ಲಿ ಭತ್ತ ಹೊತ್ತ ಕಥೆಯಾಗುತ್ತದೆ ಜೀವನ. ನೋಡಿ, ಅಷ್ಟೆಲ್ಲ ಟ್ಯಾಕ್ಸು ಕಟ್ಟಾಗಬಾರದೆಂದಿದ್ದರೆ, ಅಲ್ಲೆಲ್ಲೋ ಇನ್ವೆಸ್ಟ್ ಮಾಡಿ, ಇನ್ನೆನ್ನೋ ಸಾಲ ಮಾಡಿ ಅಂತೆಲ್ಲ ತಿಳಿದವರು ಕೂರಿಸಿ ಹೇಳಿ, ಅಯ್ಯೋ, ಇನ್ನೂ ಏನೋ ಮಾಡ್ಕೊಂಡಿಲ್ಲವೇನ್ರೀ ಥೋ ನಿಮ್ಮಾ ಎಂದು ಗಾಬರಿ ಹುಟ್ಟಿಸಿಬಿಡೂತ್ತಾರೆ. ಅದಕ್ಕೆ ತಕ್ಕ ಹಾಗೆ ನೀವು ಜೀವವಿಮೆ ಅದೂ ಇದೂಂತ ಎಲ್ಲಾ ಎಳೆದು ಮೈ ಮೇಲೆ ಹಾಕ್ಕೊಂಡು ನಾಳೆಯಿಂದ ತೆರಿಗೆ ಮುಕ್ತ ಎಂದುಕೊಳ್ಳುತ್ತೀರಿ. ಆದರೆ, ಯಾವ ದ್ರಾವಿಡ ಪ್ರಾಣಾಯಾಮ ಮಾಡಿದರೂ,ಕೊನೆಗೆ ಕಟ್ಟಬೇಕಾದ ಟ್ಯಾಕ್ಸು ಚಿಲ್ಲರೆಯಲ್ಲಿ ವ್ಯತ್ಯಾಸವಾದಂತೆ ಕಾಣುತ್ತದೆಯೇ ಹೊರತು ಬೇರೇನೂ ಆಗದು!

ಆಫೀಸಿನ ಜಂಜಡದಲ್ಲೇ ಇರುವವರಿಗಾದರೂ ಹೆಚ್ಚಿನ ಸಮಸ್ಯೆ ಇಲ್ಲ, ನಿಮ್ಮ ಕೂಡು ಕಳೆ ಗುಣಿಸು ಭಾಗಿಸುಗಳನ್ನ ಅಕೌಂಟ್ಸು ವಿಭಾಗದವರೇ ಹೆಚ್ಚಿನ ಸಲ ಮಾಡಿ, ನೀವು ಬರೀ ಇಷ್ಟೂಂತ ಟ್ಯಾಕ್ಸು ಕಟ್ಟಿದರಾಯ್ತು ಅನ್ನುತ್ತಾರೆ. ನೀವು ಹಿಂದೆ ಮುಂದೆ ನೋಡದೇ ಅವರು ಹೇಳಿದ ಅಮೌಂಟನ್ನ ಸಾವಾಸ ಸಾಕಪ್ಪಾ ಅಂತ ಕಟ್ಟಿಬಿಡುತ್ತೀರಿ. ಆದರೆ ಫ್ರೀಲ್ಯಾನ್ಸರುಗಳಾದರೆ ಮುಗಿದೇ ಹೋಯಿತು ಕತೆ. ನಿಮ್ಮ ತೆರಿಗೆಗೆ ನೀವೇ ಜವಾಬ್ದಾರರು! ಯಾರೋ ಹೇಳಿದ್ದನ್ನ ನಂಬಿಕೊಂಡು ನನ್ನ ಟ್ಯಾಕ್ಸು ನಾನೇ ಕಟ್ಟಿಕೊಳ್ಳುತ್ತೇನೆ ಅಂತ ಹೊರಟೆನಪ್ಪ ಒಂದು ಸಲ. ಆ ಗರ್ವಮೆಂಟು ವೆಬ್ ಸೈಟಲ್ಲಿ ಅಸಂಖ್ಯಾತ ಫಾರ್ಮುಗಳು. ಅದರಲ್ಲಿ ತುಂಬಿಸಬೇಕಾದ ಕೋಟಿ ದಾಖಲೆಗಳು. ಒಂದೇ ಎರಡೇ! ಮೊದಲೇ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೀರಿ. ಮಾಡಿರೋ ಕೆಲಸಕ್ಕೆ ದುಡ್ಡು ಬರೋ ಖಾತ್ರಿಯೇ ಇಲ್ಲದೇ ಹೋದರೂ, ತೆರಿಗೆಯ ಕತ್ತರಿ ಮಾತ್ರಾ ಪಕ್ಕಾ ಲೆಕ್ಕ! ಆ ಟ್ಯಾಕ್ಸು ಈ ಟ್ಯಾಕ್ಸು ಅಂತೆಲ್ಲ ಇಷ್ಟುದ್ದ ಲಿಸ್ಟು ನೋಡಿದರೆ ಸಂಬಳಕ್ಕಿಂತ ಹೆಚ್ಚೇ ತೆರಿಗೆ ಕಟ್ಟಬೇಕು ಎನ್ನುವ ಲೆಕ್ಕ ಸಿಕ್ಕು ಕಂಗಾಲು ನಾನು. ನಾನು ಆರೆಂಟು ಜಾಲತಾಣಗಳನ್ನೆಲ್ಲ ನೋಡಿ ನನ್ನ ಉಳಿಕೆ ಬಗ್ಗೆ, ನಾನು ಮಾಡಬೇಕಾದ ಹೂಡಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಅಲ್ಲಿ ಹೇಳಿದಷ್ಟು ಇನ್ವೆಷ್ಟು ಮಾಡಿ ತೆರಿಗೆ ಉಳಿಸಬೇಕು ಎಂದರೆ, ನನ್ನನ್ನೇ ನಾನು ಹರಿಶ್ಚಂದ್ರನ ತರಹ ಮಾರಿಕೊಳ್ಳಬೇಕಿತ್ತು. ನನ್ನ ಒಟ್ಟೂ ಜೀವನದ ಬಗ್ಗೆ ನನಗೆಯೇ ಮರುಕ ಬಂದು ಹೋಯಿತು. ಈ ತೆರಿಗೆಗಳನ್ನೆಲ್ಲ ಕಟ್ಟಿಕೊಂಡು ಇನ್ನೂ ನಾನು ಬದುಕಿರುವುದೇ ಒಂದು ಭಾಗ್ಯ ಎನ್ನಿಸಿ ಆನಂದವನ್ನು ಹೊಂದಿದೆ.

ಇದೆಲ್ಲ ಆದ ಮೇಲೆ, ನಾನಾಗಿಯೇ ಇನ್ನು ಮೇಲೆ ತೆರಿಗೆ ಕಟ್ಟುವ ಸಹವಾಸಕ್ಕೆ ನೇರವಾಗಿ ಹೋಗಲಾರೆ ಎಂದು ನಿರ್ಧರಿಸಿ, ಲೆಕ್ಕ ಪರಿಶೋಧಕರ ಮೊರೆ ಹೋದೆ. ಆಮೇಲೆ ಜೀವನ ಸ್ವಲ್ಪ ಸಹಜ ಸ್ಥಿತಿಗೆ ಬಂದು ಉಸಿರಾಡುವಂತಾಗಿದ್ದಂತೂ ಹೌದು. ಅಷ್ಟಾದರೂ ಸರ್ವೀಸ್ ಟ್ಯಾಕ್ಸೆಂಬ ಶೂಲವನ್ನ ನಾವೇ ಇರಿದುಕೊಳ್ಳಬೇಕಾದ ಕತೆ ಇರುವುದರಿಂದ ಲೆಕ್ಕದ ಭೂತ ಬಂದು ನನ್ನನ್ನ ತಿವಿಯುತ್ತಲೇ ಇರುತ್ತದೆ. ನೆಟ್ಟಗೆ ಸೇವಾ ತೆರಿಗೆಯನ್ನೇ ಲೆಕ್ಕ ಮಾಡಲು ಬಾರದ ನನಗೆ, ಮತ್ತೆ ಅದರ ತುದಿ ಕೊಸರು ಕೃಷಿ ಕಲ್ಯಾಣ ಸೆಸ್ಸೂ, ಸ್ವಚ್ಚ ಭಾರತ ತೆರಿಗೆ ಅಂತೆಲ್ಲ ನೂರಕ್ಕೆ ಇಪ್ಪತ್ತು ಸೇರಿಸಿ ಹತ್ತು ಕಳೆದು ಮುಕ್ಕಾಲು ಗುಣಿಸಿ, ಉಫ್! ಇಷ್ಟಾಗಿ ಸ್ವಲ್ಪ ಹೆಚ್ಚುಕಮ್ಮಿ ಲೆಕ್ಕವಾದರೆ ಎಲ್ಲ ಅಧ್ವಾನಂ. ಸೇವಾ ತೆರಿಗೆಯ ಜಾಲತಾಣವನ್ನೊಮ್ಮೆ ನೋಡಿ, ನೂರು ನೂರಾಹತ್ತು ಬಗೆಯ ಟ್ಯಾಕ್ಸುಗಳೂ, ಅದಕ್ಕೊಂದು ಕೋಡ್ ನಂಬರೂ, ಅದಕ್ಕೊಂದಿಷ್ಟು ಪರ್ಸಂಟೇಜು ಲೆಕ್ಕಾಚಾರಗಳೂ- ಅಲ್ಲಾ, ಹುಲು ಮಾನವವರಾದ ನಾವು ಇದನ್ನೆಲ್ಲ ಮಾಡಿಯೇ ತೀರಬೇಕೆಂದರೆ ಹೇಗೆ ಸ್ವಾಮಿ? ಆದರೆ ಈ ಸೀಎಗಳಿರುತ್ತಾರಲ್ಲ, ಅವರನ್ನು ನಾನು ದೇವಮಾನವರೆಂದೇ ನಿರ್ಧರಿಸಿದ್ದೇನೆ. ನಾನು ಬೆಳಗ್ಗಿಂದ ಸಂಜೆಯವರೆಗೆ ಲೆಕ್ಕಹಾಕಿಯೂ ಮುಗಿಯದ ಟ್ಯಾಕ್ಸಿನ ಗೋಜಲನ್ನ, ಅಯ್ಯೋ ಅಷ್ಟೇಯಾ ಮಾರಾಯಾ ಎಂದು ನನ್ನ ಸೀಎ ಗೆಳೆಯ ಗಿರಿ ಫಟ್ಟಂತ ಕಣ್ಕಟ್ ಮಾಡಿದ ಹಾಗೆ ಬಗೆಹರಿಸುವುದನ್ನ ನೋಡಿ ಈಗೀಗ ಅವನು ಗೋವರ್ಧನ ಗಿರಿಧಾರಿಯ ಹಾಗೇ ಕಾಣಿಸುತ್ತಾನೆ!

ಯಾರಾದರೂ ಬಂದು ನಿಮ್ಮ ಪರ್ಸು ಕಿತ್ತುಕೊಂಡು ಹೋದರೂ ಬೇಸರವಾಗದೇನೋ. ನಾವೇ ಸರಕಾರಕ್ಕೆ ಕೈ ಎತ್ತಿ ಕೊಡುವ ದುಡ್ಡಿಗೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕು ಹೇಳಿ? ಸುಮ್ನೆ ಯಾರಾದ್ರೂ ಬಂದು ನೋಡು ತಮಾ ಇದು ಲೆಕ್ಕ ಅಂತೇಳಿ ಕರೆಂಟು ಬಿಲ್ಲೋ ಕೇಬಲ್ಲು ಬಿಲ್ಲಿನ ತರವೋ ಟ್ಯಾಕ್ಸು ಕಲೆಕ್ಟು ಮಾಡಿದ್ದಿದ್ದರೆ ಭಾರಿ ಒಳ್ಳೇದಾಗುತ್ತಿತ್ತು ಎಂದು ಅನ್ನಿಸಿದ್ದಿದೆ ನಂಗೆ.  ಚಾಚೂ ತಪ್ಪದೇ ಕಟ್ಟುವ ತೆರಿಗೆಯನ್ನ ಮತ್ತೇನಾದರೂ ಕೊಂಚ ತಡ ಮಾಡಿದಿರೋ, ಮತ್ತೆ ಅದರ ಒದ್ದಾಟದ ಪರ್ವವೇ ಬೇರೆ. ಅದು ಹೇಗೋ ಮಾಡಿ ಈ ಎಲ್ಲ ತೆರಿಗೆಯ ಆಘಾತಗಳಿಗೆ ನನ್ನನ್ನ ಹೊಂದಿಸಿಕೊಂಡು ಉಸಿರು ಬಿಡುತ್ತಿದ್ದರೆ, ಈಗ ಹೊಚ್ಚ ಹೊಸ GST  ಬಂದು ಕೂತಿದೆ! ಅಲ್ಲ, ಹೆಂಗ್ ಸ್ವಾಮಿ ತಡ್ಕಳದು ಜೀವ? ಮೊದಲೇ ತೆರಿಗೆ ಬೇನೆಯಿಂದ ಬಳಲುತ್ತಿರುವ ನನ್ನಂತಹ ಬಡಪಾಯಿಗಳು, ಜಾಲತಾಣಗಳಲ್ಲಿ ಓಡಾಡುತ್ತಿರುವ ನೂರಾರು ಬಗೆಯ ಹೊಸ ಲೆಕ್ಕಾಚಾರಗಳಿಂದ ಪಕ್ಕಾ ಹೃದಯಾಘಾತಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ತಿಂಗಳೂ ತಿಂಗಳೂ ಕಪ್ಪದ ಲೆಕ್ಕ ಸಲ್ಲಿಸಬೇಕಂತೆ ಅಂದರೆ ಇಲ್ಲ ಇಲ್ಲ ವಾರಕ್ಕೊಮ್ಮೆ ಅದೇನೋ ಫಾರ್ಮು ತುಂಬಿಸಿಟ್ಟುಕೊಳ್ಳಬೇಕಂತೆ ಅಂತ ಒಬ್ಬರಂದರೆ ಮೂರು ತಿಂಗಳಿಗೊಮ್ಮೆ ಸಲ್ಲಿಕೆ ಆದರೆ ಸಾಕಂತೆ ಅಂತ ಮಗದೊಬ್ಬನ ಪ್ರಲಾಪ. ನಾನೋ, ಹೊಸದಾಗಿ ಹಳ್ಳಿಯಿಂದ ಬಂದ ಸಿದ್ದ ಡಿವೈಡರಿನ ಮೇಲೆ ನಿಂತು ಆ ಕಡೆ ಈ ಕಡೆ ಹೋಗುವ ವಾಹನಗಳನ್ನ ನೋಡಿದ ಹಾಗೆ,ಮೂಕ ಪ್ರೇಕ್ಷಕ. ಒಬ್ಬರು ಸರಕಾರದ ವಿರೋಧ, ಮತ್ತೊಬ್ಬರು ಪರ. ನಾವೆಲ್ಲ 28 ಪರ್ಸೆಂಟು ಕಟ್ಬೇಕೂಂತ ಒಂದಿಷ್ಟು ಜನ, ಇಲ್ಲ ಇಲ್ಲ 18 ಸಾಕೂಂತ ಇನ್ನೊಂದಿಷ್ಟು ಮಂದಿ. ಎಲ್ಲ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಕಲ್ಲೊಗೆವ ಮಹಾಭಟರು. ನಾನೂ ನನ್ನೆರಡು ಜ್ಞಾನಬಿಂದುಗಳನ್ನ ಈ ಜಿ.ಎಸ್.ಟಿ ಯ ಅಗಾಧ ಸಾಗರಕ್ಕೆ ಸೇರಿಸೋಣವೆಂದರೆ, ಏನು ಮಾಡಲಿ, ಭೂಪರುಗಳ ನಡುವಿನ ಬೆಪ್ಪ ನಾನು.

ಆದರೆ, ಇದ್ದಿದ್ದರಲ್ಲಿ ಈ ಸಲ ನನ್ನಂತಹ ದಡ್ಡಶಿಖಾಮಣಿಗಳಿಗೆ ಅರ್ಥವಾಗಲಿ ಅಂತಲೇ ಏನೋ, ಕೇಂದ್ರ ಸರಕಾರ ಜೀಎಸ್ಟಿ ಹೆಸರಲ್ಲಿ ತೆರಿಗೆ ವ್ಯವಹಾರ ಸರಳವಾಗಿ ಕಾಣುವ ಹಾಗಂತೂ ಮಾಡಿದೆ. ಕಟ್ಟುವ ದುಡ್ಡಲ್ಲಿ ವ್ಯತ್ಯಾಸವಾಗುತ್ತದೆಯೋ, ಇಲ್ಲವೋ ತಿಳಿಯದೇ ಹೋದರೂ ಏನು ಮಾಡುತ್ತಿದ್ದೇನೆ ಎನ್ನುವುದಂತೂ ಅರ್ಥವಾಗುವ ಹಾಗೆ ಕಾಣುತ್ತಿದೆ. ನನ್ನ ಸೀಎ ಗೆಳೆಯನಲ್ಲಿ ಕೇಳಿದೆ, ಏನಯ್ಯ ಇದು ಜೀಎಸ್ಟಿ ಈ ಸಲ ಹೆಂಗೆ ಜೀವನ ಅಂತ. ಅವನು ಬಹಳ ಚೆನ್ನಾಗಿ ಹೇಳಿದ, “ಮೊದ್ಲು ನಿಂಗೆ ಹೆಂಗೆ ಹೊಡೀತಿದ್ರೂಂತ ಗೊತಾಗ್ತಾ ಇರ್ಲಿಲ್ಲ, ಏಟು ಎಲ್ಲಿಂದ ಬೀಳ್ತಿದೆ ಅಂತ ಅಂದಾಜಾಗ್ತಾ ಇರ್ಲಿಲ್ಲ, ಇನ್ ಮೇಲೆ ಸರಿಯಾಗಿ ಗೊತ್ತಾಗತ್ತೆ”.

ಎಲ್ಲರಿಗೂ ತೆರಿಗೆ ಬೇನೆಯ ಶುಭಾಶಯಗಳು!