ಗುರುವಾರ, ಮಾರ್ಚ್ 22, 2007

ಸಲ್ಲಾಪ

ಗೆಳೆಯಾ ನಿನ್ನ ಒಲವ ಮಾತು, ನನ್ನ ಜೀವ ತುಂಬಿದೆ
ಪ್ರೇಮ ಭಾವ ಸುರಿದು ಒಳಗೆ, ನಾನು ಇಲ್ಲೇ ಕರಗಿದೆ

ಎಷ್ಟೇ ಕರಗಿದರು ನೀನು ಕರಗುವುದು ನನ್ನೆದೆಯ ಒಳಗೆ
ಧಮನಿಗಳ ಒಳಸೇರಿ ಹರಿಯುತ್ತಿ,ಜೀವನದ ಕೊನೆಯವರೆಗೆ.

ಅಯ್ಯೋ ಇನಿಯಾ ನಾನು ಯಾಕೆ ದೇಹದೊಳಗೆ ಹರಿಯುವೆ?
ಎದೆಯಗೂಡು ಸಾಕು ನನಗೆ, ಅಲ್ಲೆ ಮುದುಡಿಕೊಳ್ಳುವೆ!

ಆತ್ಮ ಸಖೀ, ನಿನ್ನ ಮುಗ್ಧ ಪ್ರೇಮಕೇನ ಹೇಳಲಿ
ನನ್ನ ಹೃದಯ ಬಡಿತದಲ್ಲಿ ನಿನ್ನ ಹೆಸರೇ ಕೇಳಲಿ.

ಮಾತು ಸಾಕೋ ಸುಮ್ಮನಿರೋ, ಭುಜಕೆ ಹಾಗೇ ಒರಗುವೆ
ನಿನ್ನ ತೋಳ ಬಿಸುಪಿನಲ್ಲಿ, ಜಗವನಿಲ್ಲೆ ಮರೆಯುವೆ.

ಇವತ್ತು "ವಿಶ್ವ ಕವನ ದಿನ"! ಆ ನೆಪದಲ್ಲೊಂದು ಕವನ..

3 ಕಾಮೆಂಟ್‌ಗಳು:

Archu ಹೇಳಿದರು...

chennagide..
nande first comment..

Parisarapremi ಹೇಳಿದರು...

nenne Dean bhujakke orkondu nidde maadthaa iddaaga hoLeethenu?? ;-)

Pramod P T ಹೇಳಿದರು...

ಚೆನ್ನಾಗಿದೆ..